ಮನದೊಳಗಿನ ಸಾವಿರ ಬಣ್ಣಗಳಲ್ಲಿ ಲೇಖನಿ ಎಂಬ ಕುಂಚವ ಅದ್ದಿ ಕನಸಿನ ಲೋಕದ ಚಿತ್ತಾರವ ಮೂಡಿಸುವ ಬಯಕೆ ಹೊತ್ತ ಹಸಿರೂರ ಹುಡುಗಿ ನಾನು..
Thursday, July 9, 2020
ಕವಿತೆ ನಾನು..
Wednesday, July 8, 2020
ಗೆಳೆಯಾ, ನೀ ಜೊತೆಗಿರದಿದ್ದರೆ...
Tuesday, July 7, 2020
ಶಾಲಾದಿನದ ಹುಳಿ-ಸಿಹಿ ನೆನಪು..!
Monday, July 6, 2020
ಹೇ ಅನಾಮಿಕ..
ಅಮ್ಮ ಕೂಗ್ತಿದ್ಲು..
"ಏನಾದ್ರೂ ಹುಚ್ಚು - ಗಿಚ್ಚು ಹಿಡಿದಿದ್ಯೇನೆ ನಿಂಗೆ? ಈ ಮಳೇಲಿ ಎಲ್ಲಿ ಓಡ್ತಿಯಾ?"
ಇದು ಹೊಸತೇನಲ್ಲ. ಪ್ರತಿ ಮಳೆಗಾಲದ ಹೊಸ ಮಳೆಗೂ ಅಮ್ಮನದು ಇದೇ ರಾಗ... ನಾನು ಓಡುತ್ತೇನೆ.. ಅವಳ ಮಾತನ್ನು ಅಲಕ್ಷಿಸಿ,..
ಗದ್ದೆ ಬಯಲಿನಲ್ಲಿ ಕುಣಿಯುತ್ತಿದ್ದೆ ಒಬ್ಬಳೇ.. "ಮಾಯದಂಥ ಮಳೆ ಬಂತಣ್ಣಾ.." ಎಂದು ಹಾಡುತ್ತಾ..
ಸೀರೆ - ರವಿಕೆ ಎಲ್ಲ ಒದ್ದೆ.
ಒದ್ದೆ ಕೂದಲಿನಿಂದ ಬೆನ್ನ ಮೇಲೆ ಇಳಿಯುವ ನೀರು ಕಚಗುಳಿ ಇಡುತ್ತಿತ್ತು. ಮುಂಗುರುಳ ನೀರು ಹಣೆಯ ಮೇಲೆ ಜಾರಿ, ಕೆನ್ನೆಯ ಮೇಲೆ ಹರಿದು, ಗಲ್ಲದ ಮೂಲಕ ಕೆಳಗಿಳಿಯುತ್ತಿತ್ತು. ನನ್ನ ಕುಣಿತಕ್ಕೆ ಪೃಕೃತಿಯೂ ಸಾಥ್ ನೀಡಿತ್ತೇನೋ.. ಗಾಳಿಗೆ ಮರಗಳೂ ತಲೆದೂಗಿದ್ದವು.
ಮಳೆ ಕಡಿಮೆ ಆಯ್ತಲ್ಲ ಅಂತಾ ನಿಂತಿದ್ದೆ ಹಳೇ ಮಾವಿನ ಮರದ ಕೆಳಗೆ. ಸೆರಗನ್ನು ಹಿಂಡಿಕೊಳ್ಳುತ್ತಾ.. ಎಷ್ಟು ಪೆದ್ದಿ ನಾನು ಮರದ ಹನಿಗಳು ಮತ್ತೂ ಒದ್ದೆ ಮಾಡುತ್ತಿದ್ದವು. ಸೀರೆ ಒಣಗಿಸುವ ವ್ಯರ್ಥ ಪ್ರಯತ್ನ..!
ನೀನದೆಲ್ಲಿಂದ ಬಂದೆಯೋ..ಈ ಸ್ಥಿತಿಯಲ್ಲಿ ನನ್ನ ನೋಡುತ್ತಿದ್ದೀಯಲ್ಲ.. ಸಂಕೋಚವಾಯ್ತು..
ಹತ್ತಿರ ಬರುವವರೆಗೆ ನಿನ್ನ ಮುಖ ನೋಡಿದ್ದೆನಷ್ಟೆ.. ಆಮೇಲೆ ನಿನ್ನ ಕೆಂಪು ಶರ್ಟು, ಕಪ್ಪು ಪ್ಯಾಂಟು, ಕರಿ ಬೂಟು, ಕುತ್ತಿಗೆಗೆ ನೇತು ಹಾಕಿದ ಕ್ಯಾಮರಾ.. ಛತ್ರಿ ಹಿಡಿದ ಎಡಗೈಲಿ ಕಂಡ ವಾಚು..
"ತಗೊಳ್ಳಿ ಇದನ್ನ.."
ನಿನ್ನ ಧ್ವನಿ ಕೇಳಿದ್ದೇ ಆಗ.. ನೀ ಕೊಟ್ಟಿದ್ದನ್ನು ತೆಗೆದುಕೊಳ್ಳುವಾಗ.. ನಿನ್ನ ಬಲಗೈ ಕಿರುಬೆರಳು ತಾಕಿತಲ್ಲ.. ನನ್ನ ಕಾಲು ಗಡ ಗಡ ನಡುಗಿತೊಮ್ಮೆ.. ಯಾಕೋ ಗೊತ್ತಿಲ್ಲ..!
ಮೊದಲೇ ಹೀಗೆ ನಿನ್ನೆದುರು ನಿಂತಿದ್ದಕ್ಕೆ ನಾಚುತ್ತಿದ್ದೆ. ನೀ ಕೊಟ್ಟ ಫೋಟೋದಲ್ಲಿ ನಾನೇ ಇದ್ದೇನೆ.
ಅರೆ.. ನಾನು ಗದ್ದೆಯಲ್ಲಿ ಕುಣಿಯುವಾಗ ನೀನು ನೋಡಿದ್ದೆ.. ನನ್ನ ಫೋಟೋ ತೆಗೆದಿದ್ದೆ ಎಂದು ತಿಳಿದಾಗ ನಿನ್ನ ಎದುರು ನಿಲ್ಲುವುದಿರಲಿ, ನೀರಾಗಿ ಕರಾಗಬಾರದೇ ಇಲ್ಲೇ ಒಮ್ಮೆ.. ಓಡಿ ಹೋಗಿಬಿಡಲೇ... ಎನಿಸಿತ್ತು.
"ತುಂಬಾ ಚೆನ್ನಾಗಿ ಡಾನ್ಸ್ ಮಾಡ್ತೀರಾ..
ನೀವು ಹುಡ್ಗಿರೆಲ್ಲ ಹೀಗೆನಾ? ಮಳೆ ಅಂದ್ರೆ ಅಷ್ಟು ಹುಚ್ಚಾ? ನಿಮ್ಮಂಥವರನ್ನ ನೋಡಿ ಸಿನೆಮಾ ಮಾಡ್ತಾರಾ ಅಥವಾ ಸಿನೆಮಾ ನೋಡಿ ನೀವು ಹೀಗಾಡ್ತೀರಾ..? "
ಬೇರೆ ಯಾರಾದ್ರೂ ಇಷ್ಟೆಲ್ಲಾ ಮಾತಾಡಿದ್ರೆ ಸೀದಾ ನೆರಿಗೆನಾ ಸೊಂಟಕ್ಕೆ ಸಿಕ್ಕಿಸಿ, ಸೆರಗನ್ನ ಕಟ್ಟಿ ಗಯ್ಯಾಳಿಯ ರೂಪ ತಾಳುವ ನಾನು, ನಿನ್ನ ಮಾತಿಗೆ ತಲೆ ತಗ್ಗಿಸಿಯೇ ಮುಗುಳ್ನಕ್ಕಿದ್ದೆ.
"ಜಾಸ್ತಿ ಕುಣಿಬೇಡಿ, ಮನೆಗ್ಹೋಗಿ.."
ಎಂದು ಹೇಳಿ ಹೊರಟೆಬಿಟ್ಟೆಯಲ್ಲ... ಸರಿಯಾಗಿ ಮುಖವನ್ನೂ ತೋರಿಸದೆ..
ನೀನು ಯಾರು ಏನು ಎಂದೂ ತಿಳಿಯಲಿಲ್ಲ. ಆ ನಂತರ ಎರಡು ಮಳೆಗಾಲ ಕಳೆದವು. ನಿನ್ನ ಸುಳಿವಿಲ್ಲ.
ಹೇ ಅನಾಮಿಕ,
ಕ್ರೂರಿ ನೀನು..
ನನ್ನೊಳಗಿನ ನನ್ನನ್ನು ಅಪಹರಿಸಿದವನೇ..
ಈಗೀಗಂತೂ ಪ್ರತಿ ಹನಿ ಮೈ ಮೇಲೆ ಬಿದ್ದಾಗಲೂ ತಂಪಾಗುವ ಬದಲು, ನಿನ್ನ ನೆನಪ ತರಿಸಿ ಉರಿಸುತ್ತಿವೆ...
ಫೋಟೋ ಕೊಟ್ಟು ಮನಸ್ಸು ಕದಿಯೋದು ಎಂಥ ಸುಲಭದ exchange ಅಂದುಕೊಂಡೆಯಾ?.....
-ಪಲ್ಲವಿ
(ಚಿತ್ರ ನೋಡಿ ಕಲ್ಪಿಸಿದ್ದು... 😉😅)
Friday, July 3, 2020
ಭೋರ್ಗರೆತ
Thursday, July 2, 2020
ಸ್ವಚ್ಛತೆಯ ನೆಪದಲ್ಲಿ ಪುಗಸಟ್ಟೆ ಉಪದೇಶ !!
Wednesday, July 1, 2020
ಬಿಂಬದ ಲೋಕ
(ಗಾಡಿಯ ಕನ್ನಡಿ ಬಳಿ ಕುಳಿತ ಹಕ್ಕಿಯೊಡನೆ ಮಾತುಕತೆ ಹೀಗಿರಬಹುದೆಂಬ ಕಲ್ಪನೆ)
-
ಅದೆಷ್ಟು ಬಣ್ಣಗಳಿಂದ ಕೂಡಿತ್ತು ನಮ್ಮಬಾಲ್ಯ.. ಅಪ್ಪನ ಜೇಬಿನಿಂದ ಕದ್ದ ಎರಡು ರೂಪಾಯಿ, ಒಂದೇ ರೂಪಾಯಿಗೆ ಸಿಗುತ್ತಿದ್ದ ಜೀರಿಗೆ ಪೆಪ್ಪರಮೆಂಟು.. ಇಪ್ಪತ್...
-
ಸದಾ ಏನನ್ನೋ ಹುಡುಕುತ್ತ ತನ್ನಲ್ಲಿ ತಾನು ಗಲಿಬಿಲಿಗೊಂಡಂತೆ ಕಾಣುವ ಬೆಂಗಳೂರು ನನ್ನಲ್ಲಿ ಬಹಳಷ್ಟು ಬಾರಿ ಬೆರಗನ್ನು ಮೂಡಿಸಿದೆ. ಯಾವುದನ್ನು ಆಚೆ ಹಾಕದೆ ಮೌನವಾಗಿ ಎಲ್ಲವನ...
-
ಇರುಳ ಮಡಿಲಿಗೆ ಸೇರುವ ತವಕ ಸೂರ್ಯನಿಗೆ, ಓಡುತ್ತಾನೆ ಒಂದರೆ ಘಳಿಗೆ ಕಾಯದೆಯೇ.. ನಮ್ಮ ನಿಮ್ಮಂತೆ ಟ್ರಾಫಿಕ್ ಸಿಗ್ನಲ್ ಇರುವುದೇ ಅವನಿಗೆ!! ಕತ್ತಲ ನಡುವೆ ಬೀದಿ ದೀಪವೊಂದ...
-
ನಿನಗೆ ಹುಚ್ಚೆನಿಸಬಹುದು.. ಈ ಬಳೆಗಳೆಲ್ಲ ಮಾತನಾಡುತ್ತವೆ ನನ್ನ ಬಳಿ.. ಎಷ್ಟೆಂದರೂ ನೀನೇ ತೊಡಿಸಿದ್ದಲ್ಲವೇ.. ಮುಂಗುರುಳ ಕಿವಿಯ ಹಿಂದೆ ತಳ್ಳುವಾಗಲೆಲ್ಲ...
-
ನಿಜ ಹೇಳು.. ನಾ ಕಂಡಿದ್ದು ನಿನ್ನನೇ ಅಲ್ಲವೇ? ಬೆಳಗಿನ ಹಾದಿಯಲಿ ಅರಳಿನಿಂತ ಸಂಪಿಗೆಯ ಘಮವಲ್ಲವೇ ನೀನು? ಸುಡುವ ಮಧ್ಯಾಹ್ನ, ಎನ್ನ ತಂಪಾಗಿಸಿದ ಮಳೆಯಲ್ಲವೇ ನ...
-
ಕರ್ನಾಳ ಮಾಸ್ತರು ಸುಮಾರು ಮೂವತ್ತರ ಆಸು ಪಾಸಿನವರು. ಕಿರಾಣಿ ವ್ಯಾಪಾರ ಅವರ ಕೆಲಸವಾದರೂ, ಮಾಸ್ತರರು ಎಂದೇಕೆ ಕರೆಯುವರೆಂದು ಯಾರಿಗೂ ತಿಳಿದಿಲ್ಲ. ಅವರ ಕುಟುಂಬದಲ್ಲಿ ಮೊದಲ...
-
ಪುಸ್ತಕದ ಹಾಳೆಗಳ ನಡುವೆ ಅವಿತಿದ್ದ ನವಿಲುಗರಿ ಮಾಸಿದ ದಿನಗಳಿಗೆ ಬಣ್ಣ ತುಂಬಿತ್ತು... ಪ್ರತಿ ಸಾಲೂ ನಿನ್ನದೇ ಕತೆ ಹೇಳುವಾಗ ಬಣ್ಣ ತುಂಬಿದ ಚಿತ್ರಕೆ ಜೀವ ಬಂದಿತ್ತು... ಈ...
-
ನೀನೆಂದೂ ಮುಗಿಯದ ಕವನ ಆದಿ ನಿನ್ನಿಂದಲೇ.. ಅಸ್ತಿತ್ವವೂ ನಿನ್ನಲ್ಲೇ... ಸಖ, ನಿನ್ನ ಕಣ್ಣ್ಬಟ್ಟಲಲಿ ಕಾಣುವ ಬಿಂಬವೇ ಸಾಕ್ಷಿ ಎನ್ನೊಲವಿಗೆ.. ನಿನ್ನೊಲವ ಮಳೆಯಲಿ ಕರಗಿ ಮತ್...
-
ಸುಲೋಚನೆಯ ಮನಸ್ಸು ಆಲೋಚನೆಯಲ್ಲಿ ಮುಳುಗಿತ್ತು. ನೀಲಕೂಟ ಬಿಟ್ಟು ಬೇರೆ ಯಾವುದಾದರು ಊರನ್ನು ನೋಡಿದ್ದರೆ ಅದು ತನ್ನ ಅಜ್ಜಿಮನೆ ಮಾತ್ರ..! ವರುಷಕ್ಕೊಮ್ಮೆ ದ...
-
ಬದುಕು ದಾಳದಾಟ ಒಮ್ಮೆ ಆರು.. ಮತ್ತೊಮ್ಮೆ ಮೂರು.. ಒಮ್ಮೆ ಜಿಗಿತ.. ಮತ್ತೊಮ್ಮೆ ಹೊಡೆತ.. ಏರಿದಾಗ ಹಿಗ್ಗದೇ, ಬಿದ್ದಾಗ ಕುಗ್ಗದೇ.. ನಿಶ್ಚಲವಾಗಿರುವುದು...