ಸುರಿವ ಮಳೆ ಧರೆಯ ತಂಪಾಗಿಸಿರಲು..
ತಂಗಾಳಿಯೊಡನೆ ಮಲ್ಲಿಗೆಯ ಕಂಪೂ ಕಿಟಕಿಯೊಳಗೆ ತೂರಿ ಬರಲು,
ಜೀರುಂಡೆಗಳ ಹಾಡಿಗೆ, ಕಪ್ಪೆ ತಾಳ ಹಾಕುತಿರೆ,
ಬಿಸಿ ಬಿಸಿ ಚಹಾ, ಹಲಸಿನಕಾಯಿ ಹಪ್ಪಳ ಜೊತೆಯಾಗಲು,..
ಇಷ್ಟದ ಪದ್ಯವ ಗುನುಗುತ್ತ, ಖಾಲಿ ಹಾಳೆಯ ಮೇಲೆ ಗೀಚುತ್ತಿರಲು..
ಲೋಕವೇ ಮರೆತಿತ್ತು...
ಮಳೆಹನಿ ಸೋಕಿ ತಂಪಾದಾಗಲೇ ಅರಿವಾಗಿದ್ದು,
ಈ ಸಂಜೆ ಕಳೆದೇ ಹೋಗಿತ್ತು.....
No comments:
Post a Comment