ಜಾತ್ರೆಯಲಿ ಕಂಡ ಬಣ್ಣದ ಸಿಹಿಯನು,
ರಾತ್ರಿಯೂ ಕನವರಿಸಿದಂತೆ.. ಸದಾ ನಿನ್ನ ಗುಂಗು..
ನಡುರಾತ್ರಿಯಲಿ ಒಂಟಿಯಾಗಿ ಬಿಟ್ಟುಹೋದಾಗ,
ಭಯದಲ್ಲಿ ಬೆನ್ನಹುರಿಯಿಂದ ಬರುವ ನಡುಕ..
ಉತ್ತರ ಸಿಗದ ಪ್ರಶ್ನೆಗಳ ಹುಡುಕಾಟದಲ್ಲಿಯೂ,
ಮನಸು ನಿನ್ನ ಅರಸಿದೆ...
ಕಾಡಿದೆ, ಬೇಡಿದೆ, ಮುದ್ದಿಸಿದೆ,
ಆಲಂಗಿಸಿದೆ.. ರೇಗಿಯೂ ಬಿಟ್ಟೆ..
ಉಹೂ.. ನನ್ನ ಮಾತನ್ನೇ ಕೇಳುತ್ತಿಲ್ಲ..
ಹಠವ ಹಿಡಿದು, ಬಿಕ್ಕಳಿಸುತ್ತ ಮೂಲೆ ಸೇರಿದೆ..
ಹೇಗೆ ಸಂತೈಸಲಿ ಅದನು..
ಮುರಿದುದು ಆಟಿಕೆಯಲ್ಲ, ಮನಸ್ಸೆಂದು
ಹೇಗೆ ಅರ್ಥೈಸಲಿ..
-ಪಲ್ಲವಿ
No comments:
Post a Comment