ಬಿಳಿ ಮುತ್ತುಗಳು ಅಣಿಯಾಗಿವೆ
ಧರೆಯಲಿ ಬೆರೆಯಲು..
ನಸುಕಿನ ಮಂಜು ಭೂರಮೆಯ
ಸೀರೆಯಂಚಲಿ ಚಿತ್ತಾರವಾಗಿರಲು..
ಹೊದ್ದು ಮಲಗಿದೆ ಜಗವು,
ಜಂಜಡವ ಮರೆತು..
ಇಣುಕಿದನವ ಮೋಡಗಳ ಮರೆಯಿಂದ,
ಧಾರುಣಿಯ ಚೆಲುವ ಕಂಡು ನಸುನಕ್ಕ..
ನಗುವಿಗೆ ಸೋತು ಕೆಂಪೇರುತಿಹುದು ಲೋಕ,
ಜೊತೆಗೆ ಕಲರವದ ಸಿಹಿ ಪಾಕ...
ತಲೆದೂಗಿದೆ ಹಸಿರು ಮೈಮರೆತು,
ಜಾರಿದ ಹನಿಯೊಂದು ಧರೆಯ ಸೇರಿದೆ..
ನವದಿನದ ಪ್ರಾರಂಭ ಭುವಿಯೊಳು,
ಚಳಿಗಾಲಕೆ,ಮೊದಲ ಗುಟುಕು ಚಹಾವಿರಲು!!
ನಿತ್ಯ ನೂತನ ಪ್ರಕೃತಿಯ ಮಡಿಲು...
-ಪಲ್ಲವಿ
(ಚಿತ್ರ: ಕೆ. ಪಿ. ಸತ್ಯನಾರಾಯಣ)
No comments:
Post a Comment