ಮನಸಿಗೆ ಮಾತ್ರವೇ ಅರಿವಾಗುವ ಮಾತು
ನಾಲಿಗೆಯಿಂದ ಎಂದೂ ಹೊರಡಲಾರದು..
ತುಂಬಿದ ಕಣ್ಣು, ನಿಟ್ಟುಸಿರು, ನವಿರು ಸ್ಪರ್ಶ,
ಬೆಚ್ಚನೆಯ ಅಪ್ಪುಗೆ, ಸವಿ ಮುತ್ತು
ಹೇಳುವ ಸಾಂತ್ವನದ ಎದುರು
ಸಹಸ್ರ ಶಬ್ದಗಳೂ ಸೋಲುವವು..
ಮೌನವೂ ಪ್ರಿಯವೆನಗೆ..
ಅಲ್ಲಿ ಲೋಕದ ಮಾತಿಲ್ಲ...
ಮೆದುಳು ಹೇಳುವ ಮಾತಿಗೆ ಆಸ್ಪದವಿಲ್ಲ..
ಕೊಂಕು, ಚುಚ್ಚುಗಳಿಗೆ ಅವಕಾಶವೇ ಇಲ್ಲ..
ಮನಸು ಮಾತ್ರವೇ ಮಾತನಾಡುವುದು..
ಮೌನವಾಗಿ, ತನ್ನಿಚ್ಛೆಯಂತೆ..
-ಪಲ್ಲವಿ
No comments:
Post a Comment