ಅಲ್ಲಿ ಮೂರಿಂಚಿನ ಬಣ್ಣವಿಲ್ಲ
ಸಾವಿರ ಕೊಟ್ಟು ತಂದ ಬಟ್ಟೆಗಳೂ ಅಲ್ಲ
ಮುಖವಾಡ ಧರಿಸುವ ವಯಸ್ಸಲ್ಲ,
ಅವಶ್ಯವೂ ಅಲ್ಲ..
ಕೆದರಿದ ಕೂದಲು, ಕೊಳಕು ಬಟ್ಟೆ
ಮಣ್ಣಿನ ಆಟ..
ಕಲ್ಮಶಕ್ಕೆ ಆಸ್ಪದವೇ ಇಲ್ಲ..
ಅದರರ್ಥವೂ ತಿಳಿದಿಲ್ಲ..
ಅಂತರಾಳದಿಂದ ಬಂದ
ನಗುವೊಂದೇ ಆಭರಣ..
ಕೋಟಿ ಕೊಟ್ಟರೂ ಕೊಳ್ಳಲಾರದ
ಸಂಪತ್ತಿನ ರಾಯಭಾರಿ..
ಭೇಟಿನೀಡಬೇಕಿದೆ ಮುಚ್ಚಿದ ಕಣ್ಣೊಳಗಿನ
ಸವಿಯಾದ ಲೋಕದೊಳಗೊಮ್ಮೆ ,
ಆ ನಗುವಿನೊಡನೆ ಕಳೆದುಹೋಗಬೇಕಿದೆ ಒಮ್ಮೆ...
ಅಸೂಯೆಯಿಂದ ಹೇಳಿದನಂತೆ ಸಾಮ್ರಾಟನೊಬ್ಬ!!
-ಪಲ್ಲವಿ
(ಚಿತ್ರಕ್ಕಾಗಿ ಸಾಲುಗಳು)
No comments:
Post a Comment