ರಟ್ಟೆಯ ಮೇಲಿನ ಬುಟ್ಟಿಯ ತುಂಬಾ
ಬಣ್ಣಗಳ ಹೊತ್ತವನು..
ಯಾವ ಬಣ್ಣವೂ ಅವನದಲ್ಲ..
ಮೆತ್ತನೆಯ ಬೊಂಬೆಯಂತೆ ಇರದು
ಬದುಕು, ಸವೆಸಲೇಬೇಕು ಪಾದವ..
ಕಾಲಿಗೆ ಕಟ್ಟಲೇಬೇಕು ಚಕ್ರವ..
ಬೊಂಬೆಯ ಕಂಡು ಮಗುವೊಂದು
ನಕ್ಕರೆ ಮಾತ್ರವೇ ಸಕ್ಕರೆ..
ಬುಟ್ಟಿಯ ನೆರಳೇ ಬದುಕಿಗಾಸರೆ..
ಹುಲಿ ಕರಡಿ ಆಮೆ ಮೊಲವ
ಹೊತ್ತು ತಿರುಗುವನವ..
ಸುಡುವ ಬಿಸಿಲ ಲೆಕ್ಕಿಸಿದೆ;
ಬಯಸಿ ಹೊತ್ತಿನೂಟವ..
-ಪಲ್ಲವಿ (ಚಿತ್ರಕ್ಕಾಗಿ ಸಾಲುಗಳು)
ಚಿತ್ರ : ತಾಯಿ ಲೋಕೇಶ್
No comments:
Post a Comment