ಕತ್ತಲ ಲೋಕದಿ ಪ್ರಜ್ವಲಿಸುತಿಹ ಹಣತೆ
ಕಟುಕರ ಸ್ವಾರ್ಥಕೆ ಬಲಿಯಾಯ್ತೆ !
ಮಂದ ಬೆಳಕಿರಬಹುದು
ನಂದಾದೀಪವೇ ಅದು..
ಕಿಡಿಯೊಂದು ಜ್ವಾಲೆಯಾಗಿ
ಸುಡದೆಂಬ ಭ್ರಮೆಗೆ ಏನೆನ್ನಲಿ..
ಒಡೆದಿತ್ತು ಹಣತೆ,ಎಣ್ಣೆ ಸೋರಿತ್ತು
ಮುರಿದಿತ್ತು ಎಲುಬು, ನೆತ್ತರು ಹರಿದಿತ್ತು
ಬತ್ತಿಯ ಎಳೆದ ರಭಸಕೆ, ಜಿಹ್ವೆ ಇಬ್ಭಾಗವಾಗಿತ್ತು
ನೋವ ನಿಟ್ಟುಸಿರಿಗೆ ಪ್ರಾಣಜ್ಯೋತಿ ಆರಿತ್ತು!
ದೀಪ ಇಂದಿಗೂ ಪವಿತ್ರವೇ !
ದುಷ್ಟ ಕಂಗಳು, ರಕ್ಕಸ ಕೈಗಳು
ಮೃಗ ಮನಗಳು ಪೂಜನೀಯವೇ?
ಅಂಧಕಾರವಿರಬಹುದು, ದೇದೀಪ್ಯಮಾನ
ಬೆಳಕೊಂದು ಸುಡದಿರದು ಕೆನ್ನಾಲಿಗೆಯ ಚಾಚಿ...
-ಪಲ್ಲವಿ
No comments:
Post a Comment